ತಿರುಪತಿ ಯಾತ್ರೆ ಮುಗಿಸಿಕೊಂಡು ವಾಪಸಾಗುತ್ತಿದ್ದಾಗ ಟಿಟಿ ವಾಹನ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ತಾಲೂಕಿನ ಕುರುಬಲಕೋಟ ಮಂಡಲದ ಚೆನ್ನಾಮರ್ರಿಮಿಟ್ಟ ಬಳಿ ಅಪಘಾತಗೊಂಡು ಮೂವರು ಕನ್ನಡಿಗರು ಮೃತಪಟ್ಟಿದ್ದಾರೆ.
ತಿರುಪತಿಯಿಂದ ಮರಳುತ್ತಿದ್ದ ಟಿಟಿ ವಾಹನಕ್ಕೆ ಭಾರಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಟಿಟಿ ನಜ್ಜುಗುಜ್ಜಾಗಿ ಅದರಲ್ಲಿದ್ದ ಮೂವರು ಮೃತಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಬಾಗೇಪಳ್ಳಿ ತಾಲೂಕಿನ ಮೇಘೇಶ್ (17), ಚರಣ್ (17) ಮತ್ತು ಶ್ರಾವಣಿ (28) ಮೃತಪಟ್ಟವರು. ಟಿಟಿ ವಾಹನದಲ್ಲಿದ್ದ ಇನ್ನೂ ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.