Menu

Accident Death: ಕೆಆರ್‌ ಪೇಟೆಯಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ಹರಿದು ವ್ಯಕ್ತಿ ಸಾವು

ಶ್ರೀನಿವಾಸಪುರ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಣೆ ಮಾಡುತ್ತಿದ್ದ ಡಬಲ್ ಟ್ರ್ಯಾಲಿ ಟ್ರ್ಯಾಕ್ಟರ್ ಹರಿದು ಸೈಕಲ್‌ ಸವಾರ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಆನೆಗೊಳ ಚಿಕ್ಕತರಹಳ್ಳಿ ಗ್ರಾಮದ ಈರಪ್ಪ(55) ಮೃತಪಟ್ಟಿದ್ದಾರೆ.

ಚಾಲಕ ಸಂಚಾರ ನಿಯಮ ಮೀರಿ ಡಬಲ್ ಟ್ರ್ಯಾಲಿ ಅಳವಡಿಸಿಕೊಂಡಿದ್ದು, ಕೆಲಸ ಮುಗಿಸಿ ಸೈಕಲ್‌ನಲ್ಲಿ ಗ್ರಾಮಕ್ಕೆ ತೆರಳುತ್ತಿದ್ದ ಈರಪ್ಪ ಎಂಬವರ ಮೇಲೆ ಟ್ರ್ಯಾಕ್ಟರ್‌ ಹರಿಸಿದ್ದಾನೆ.

ಡಬಲ್ ಟ್ರ್ಯಾಲಿ ಟ್ರ್ಯಾಕರ್ ಸಂಚಾರದಿಂದ ಈ ದುರಂತ ಸಂಭವಿಸಿರುವದಾಗಿ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Related Posts

Leave a Reply

Your email address will not be published. Required fields are marked *