Menu

ಶಿವಮೊಗ್ಗದಲ್ಲಿ ಒಣಗಿದ ಬಟ್ಟೆ ತೆಗೆಯಲೆಂದು ಹೋದ ದಂಪತಿ ವಿದ್ಯುತ್‌ ಸ್ಪರ್ಶಕ್ಕೆ ಬಲಿ

ಶಿವಮೊಗ್ಗದ ಸೊರಬ ತಾಲೂಕು ಕಪ್ಪಗಳಲೆ ಗ್ರಾಮದಲ್ಲಿ ಒಣಗಲು ಹಾಕಿದ್ದ ಬಟ್ಟೆ ತೆಗೆಯಲು ಹೋದಾಗ ವಿದ್ಯುತ್‌ ಸ್ಪರ್ಶಗೊಂಡು ದಂಪತಿ ಮೃತಪಟ್ಟಿದ್ದಾರೆ.
ಕೃಷ್ಣಪ್ಪ( 53) ಹಾಗೂ ವಿನೋದಾ( 43) ಮೃತಪಟ್ಟ ದಂಪತಿ. ಬಟ್ಟೆ ಒಣಗಲು ಹಾಕಿದ್ದ ತಂತಿ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದು ಈ ದುರಂತ ಸಂಭವಿಸಿದೆ.

ಮನೆಯ ಬಳಿ ತಂತಿಯ ಮೇಲೆ ವಿನೋದಮ್ಮ ಬಟ್ಟೆ ಒಣಗಲು ಹಾಕಿದ್ದರು. ಮಳೆ ಬಂದ ಹಿನ್ನೆಲೆ ರಾತ್ರಿ ಬಟ್ಟೆ ತೆಗೆಯಲು ಹೋಗಿದ್ದರು, ಈ ವೇಳೆ ಶಾಕ್ ಹೊಡೆದ್ದರಿಂದ ವಿನೋದಮ್ಮ ಕೂಗಿಕೊಂಡಾಗ ಪತಿ ಕೃಷ್ಣಪ್ಪ ತಕ್ಷಣವೇ ನೆರವಿಗೆ ಧಾವಿಸಿದ್ದು ಅವರಿಗೂ ಶಾಕ್‌ ಹೊಡೆದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *