Menu

ಸರ್ಕಾರದ ವಿರುದ್ಧ ಮತ್ತೆ ಶಾಸಕ ರಾಜು ಕಾಗೆ ಧ್ವನಿ

ತಮ್ಮದೇ ಸರ್ಕಾರದ ಲೋಪ ದೋಷಗಳನ್ನು ಎತ್ತಿ ಹಿಡಿದ ಶಾಸಕ ರಾಜು ಕಾಗೆ, ಸರ್ಕಾರದ ನೀತಿ ಖಂಡಿಸಿ ರಾಜೀಜಿನಾಮೆ ನೀಡಿದರೂ ಅಚ್ಚರಿಯಿಲ್ಲ ಎಂದು ಹೇಳಿದ್ದಾರೆ. ವಸತಿ ಇಲಾಖೆಯಲ್ಲಿ ಲಂಚ ನಡೆಯುತ್ತಿದೆ ಎಂಬ ಶಾಸಕ ಬಿ ಆರ್ ಪಾಟೀಲ್ ಹೇಳಿಕೆಗೆ ಬಹಿರಂಗವಾಗಿ ಶಾಸಕ ಕಾಗೆ ಧ್ವನಿಗೂಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಶಾಸಕ ರಾಜು ಕಾಗೆ, ಎರಡು ವರ್ಷವಾದರೂ ಕಾಮಗಾರಿ ವಿಳಂಬವಾಗಿ ಸಾಗುತ್ತಿದೆ ಎಂದು ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾವುದೇ ಯೋಜನೆಗೆ ಹಣ ಬಿಡುಗಡೆಗೆ ಆಗುತ್ತಿಲ್ಲ. ಕಾಮಗಾರಿ ಶುರು ಮಾಡಿದ ಗುತ್ತಿಗೆದಾರ ವರ್ಷಗಳು ಕಳೆದರೂ ಕೆಲಸ ಮಾಡುತ್ತಿಲ್ಲ , ಎಇಇ, ಇಇ ಅಧಿಕಾರಿಗಳ ಬೇಜವಾಬ್ದಾರಿ ಹೆಚ್ಚಾಗಿದೆ, ನನ್ನ ಮನಸ್ಸಿಗೆ ನೋವು ಆಗಿದೆ. ನಾನು ರಾಜೀನಾಮೆ ಕೊಡಬೇಕು ಅನ್ನಿಸುತ್ತಿದೆ. ಎರಡು ದಿನಗಳಲ್ಲಿ ಸಿಎಂಗೆ ರಾಜಿನಾಮೆ ಕೊಟ್ಟರೂ ಆಶ್ಚರ್ಯವಿಲ್ಲ ಎಂದಿದ್ದಾರೆ.

ಜನರು ನನ್ನ ಪ್ರಶ್ನೆ ಮಾಡುತ್ತಿದ್ದಾರೆ, ಜನರಿಗೆ ಉತ್ತರ ಕೊಡಲು ಆಗುತ್ತಿಲ್ಲ. ಸಿಎಂ ಹತ್ತಿರ ೧೩ ಕೋಟಿ ರೂ. ಸಮುದಾಯ ಭವನಗಳ ಅನುದಾನ ಪಡೆದು ಎರಡು ವರ್ಷವಾದರೂ ವರ್ಕ ಆರ್ಡರ್ ಸಿಕ್ಕಿಲ್ಲ ಎಂದು ಹೇಳಿದ ಶಾಸಕ ಕಾಗೆ, ಸರ್ಕಾರದ ಹಲವಾರು ಕಾಮಗಾರಿ ಲೋಪಗಳನ್ನು ಎತ್ತಿ ಹಿಡಿದಿದ್ದಾರೆ.

Related Posts

Leave a Reply

Your email address will not be published. Required fields are marked *