ರಾಜ್ಯದಲ್ಲಿ ತುಂಗಭದ್ರಾ ಅಣೆಕಟ್ಟು ಗೇಟ್ ಅವಘಡದ ಬಳಿಕ ಇದೀಗ ಮೈಸೂರು ಎಚ್ ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿ ಕಬಿನಿ ಜಲಾಶಯದಲ್ಲಿ ಬಿರುಕು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.
ಬಲದಂಡೆಯ ಮುಖ್ಯ ದ್ವಾರದ ಬಳಿ ನೀರು ಸೋರಿಕೆಯಾಗಿರುವ ಬಳಿಕ ಮತ್ತೊಂದು ಭಾಗದಲ್ಲೂ ಬಿರುಕು ಪತ್ತೆಯಾಗಿದೆ. ಕಬಿನಿ ಅಣೆಕಟ್ಟೆಯ ಹೃದಯ ಭಾಗದ ಬಿರುಕನ್ನು ಕಾಣಿಸದಂತೆ ಅಧಿಖಾರಿಗಳು ಸಿಮೆಂಟ್ನಿಂದ ಮುಚ್ಚಿ ಅಣೆಕಟ್ಟೆ ಹೊರ ಭಾಗದಿಂದ ಗಾರೆ ಹಾಕಿದ್ದಾರೆ ಎನ್ನಲಾಗಿದೆ.
ಗಾರೆಯ ಮೇಲ್ಭಾದಲ್ಲೂ ಬಿರುಕು ಬಿಟ್ಟು ಅಣೆಕಟ್ಟಿನ ಕ್ರಸ್ಟ್ ಗೇಟ್ ಪಕ್ಕದಲ್ಲೇ ನೀರಿನ ಸೋರಿಕೆ ಉಂಟಾಗಿದೆ. ಲೀಕೇಜ್ ಗ್ಯಾಲರಿ ಪಕ್ಕದಿಂದ ಸುಮಾರು 80ಕ್ಕೂ ಹೆಚ್ಚು ಅಡಿ ಉದ್ದ ಬಿರುಕು ಮೂಡಿದ್ದರೂ ವ್ಯವಸ್ಥಿತವಾಗಿ ಬಿರುಕು ಸರಿಪಡಿಸದೆ ಅಧಿಕಾರಿಗಳು ನಿರ್ಲಕ್ಷ್ಯ ತಾಳಿರುವುದರಿಂದ ರೈತರಲ್ಲಿ ಆತಂಕ ಉಂಟಾಗಿದೆ.
ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಅನಾಹುತಕ್ಕೆ ದಾರಿಯಾಗಲಿದೆ, ತಜ್ಞರು ದುರಸ್ಥಿಗೆ ಸಲಹೆ ನೀಡಿದ್ದರೂ ಅಧಿಕಾರಿ ನಿಷ್ಕ್ರಿಯರಾಗಿರುವುದರಿಂದ ಪರಿಸ್ಥಿತಿ ಕೈ ಮೀರಿದರೆ ಅಣೆಕಟ್ಟು ಒಡೆಯುವ ಭೀತಿ ಎದುರಾಗಿದೆ.