Menu

ಏರ್ ಇಂಡಿಯಾ ವಿಮಾನದಲ್ಲಿ ಬೆದರಿಕೆಯೊಡ್ಡಿದ ವೈದ್ಯೆ ಪೊಲೀಸ್‌ ವಶಕ್ಕೆ

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಮತ್ತು ವಿಮಾನವನ್ನು ಅಪಘಾತಕ್ಕೀಡು ಮಾಡುವುದಾಗಿ ಬೆದರಿಕೆ ಹಾಕಿದ ಆರೋಪದಡಿ ಬೆಂಗಳೂರು ಪೊಲೀಸರು ಮಹಿಳಾ ವೈದ್ಯರನ್ನು ವಶಕ್ಕೆ ಪಡೆದಿದ್ದಾರೆ. ಯಲಹಂಕ ಬಳಿಯ ಶಿವನಹಳ್ಳಿ ನಿವಾಸಿ ವ್ಯಾಸ್ ಹಿರಾಲ್ ಮೋಹನ್ ಭಾಯ್ ಆರೋಪಿ ವೈದ್ಯೆ.

ಮಂಗಳವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಸೂರತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ ಹೊರಡುವ ಕೆಲವೇ ನಿಮಿಷಗಳ ಮೊದಲು ಈ ಘಟನೆ ನಡೆದಿದೆ.

ವೈದ್ಯೆ ತನ್ನ ಬ್ಯಾಗ್‌ಗಳನ್ನು ವಿಮಾನದ ಮೊದಲ ಸಾಲಿನಲ್ಲಿ ಬಿಟ್ಟು ತನ್ನ ಸೀಟ್‌ನಲ್ಲಿ ಕುಳಿತಿದ್ದರು. ಕ್ಯಾಬಿನ್ ಸಿಬ್ಬಂದಿ ವೈದ್ಯೆಗೆ ಆಕೆಯ ಸೀಟಿನ ಬಳಿಯ ಓವರ್‌ಹೆಡ್ ಕಂಪಾರ್ಟ್‌ಮೆಂಟ್‌ನಲ್ಲಿ ಬ್ಯಾಗ್‌ ಇಡಲು ಹೇಳಿದಾಗ ಆಕೆ ನಿರಾಕರಿಸಿ ಸಿಬ್ಬಂದಿಯೇ ತಮ್ಮ ಬ್ಯಾಗ್ ಅನ್ನು ತಮ್ಮ ಸೀಟಿಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದ್ದಾರೆ.

ಸಿಬ್ಬಂದಿ ವಿನಂತಿಬಳಿಕ ಪೈಲಟ್‌ನ ಹೇಳಿದರೂ ಆಕೆ ಒಪ್ಪಲು ನಿರಾಕರಿಸಿ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು. ಸಹ ಪ್ರಯಾಣಿಕರ ಮೇಲೂ ಅವರು ಕೂಗಾಡಿದರು. ವಿಮಾನವನ್ನು ಅಪಘಾತಗೊಳಿಸುವುದಾಗಿ ಬೆದರಿಕೆ ಹಾಕಿದಾಗ ಪೈಲಟ್ ಮತ್ತು ಸಿಬ್ಬಂದಿ ಭದ್ರತಾ ಸಿಬ್ಬಂದಿ ಮತ್ತು ಸಿಐಎಸ್‌ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದರು, ನಂತರ ಆಕೆಯನ್ನು ವಿಮಾನದಿಂದ ಕೆಳಗಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Related Posts

Leave a Reply

Your email address will not be published. Required fields are marked *