ಬಳ್ಳಾರಿ ನವವೃಂದಾವನ ಗಡ್ಡೆಯ ಶತಮಾನದ ಪ್ರಕರಣ ಸುಪ್ರೀಂಕೋರ್ಟ್ನ ಸಂಧಾನದೊಂದಿಗೆ ಅಂತ್ಯ ಕಂಡಿದೆ. ಎರಡು ಮಠಗಳ ನಡುವೆ ಶತಮಾನಗಳಿಂದ ಇದ್ದ ದ್ವೇಷಕ್ಕೆ ತಿಲಾಂಜಲಿ ಬಿದ್ದಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ನ್ಯಾಯಮೂರ್ತಿ ಸಂಜಯ್ ಕೌರ್ ನೇತೃತ್ವದಲ್ಲಿ ಸಂಧಾನ ನಡೆದಿದೆ. ಉಭಯ ಮಠಗಳ ಶ್ರೀಪಾದರ ಜೊತೆ ಮಾತನಾಡಿ ನ್ಯಾಯಾಧೀಶರು ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.
ನವವೃಂದಾವನ ಜಾಗದಲ್ಲಿ ರಘುವರ್ಯ ತೀರ್ಥರ ವೃಂದಾವನದ ಪೂಜೆ ವಿವಾದದ ಬಗ್ಗೆ ಮಾತುಕತೆ ನಡೆದು ಉಭಯ ಮಠದ ಶ್ರೀಪಾದರು ಶೇಷವಸ್ತ್ರ ಸಮರ್ಪಿಸಿ ಹಸ್ತಲಾಘವ ಮಾಡಿಕೊಂಡರು.
ಮಂತ್ರಾಲಯದ ರಾಯರ ದರ್ಶನಕ್ಕೆ ಉತ್ತರಾದಿ ಮಠದ ಶ್ರೀಪಾದರಿಗೆ ರಾಯರ ಮಠದ ಶ್ರೀಪಾದರು ಆಹ್ವಾನ ನೀಡಿದರು. ಪ್ರತಿ ಆರಾಧನೆ ಗಂಗಾವತಿ, ಧಾರವಾಡ, ದೆಹಲಿ ನ್ಯಾಯಾಲಯದ ತೀರ್ಪಿನ ಮೇಲೆ ನಡೆಯುತ್ತಿತ್ತು.