ರೌಡಿಶೀಟರ್ ಪಟ್ಟಿಯಲ್ಲಿದ್ದ ಹಿಂದೂ ಕಾರ್ಯಕರ್ತ ಎನ್ನಲಾಗಿರುವ ಸುಹಾಸ್ ಶೆಟ್ಟಿಯ ಹತ್ಯೆಯ ತನಿಖೆಯನ್ನು ಎನ್ಐಎಗೆ ಹಸ್ತಾಂತರಿಸಿದ ಬಳಿಕ ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ಆಂತರಿಕ ಕಲಹ ಭುಗಿಲೆದ್ದಿದೆ.
‘ನಿಮ್ಮಲ್ಲಿ ತಾಕತ್ತಿದೆ’ ಎಂದು ಬಿಜೆಪಿಯನ್ನು ಶ್ಲಾಘಿಸಿದ ಮಂಗಳೂರಿನ ಕಾಂಗ್ರೆಸ್ ಮುಸ್ಲಿಂ ಮುಖಂಡ ಸುಹೇಲ್ ಕಂದಕ್, ನಮ್ಮ ಇಬ್ಬರು ಮುಸ್ಲಿಂ ಯುವಕರ ಹತ್ಯೆಯನ್ನೂ ಎನ್ಐಎಗೆ ವಹಿಸಿ ನ್ಯಾಯ ನೀಡಿ ಎಂದು ಮನವಿ ಮಾಡಿದ್ದಾರೆ.
“ನಿಮ್ಮಲ್ಲಿ ತಾಕತ್ತಿದೆ, ನಮ್ಮಲ್ಲಿ ಪೊಟ್ಟು ವಾಟ್ಸಪ್ ಚರ್ಚೆಗಳಿವೆ, ನಿಮ್ಮ ಲಿಸ್ಟ್ ಅಲ್ಲಿ ಕುಡುಪು ಅಶ್ರಫ್ ಹಾಗೂ ಬಂಟ್ವಾಳ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣವನ್ನೂ ಸೇರಿಸಿ ನ್ಯಾಯ ಒದಗಿಸಿ,” ಎಂದು ಕೇಳಿಕೊಂಡಿದ್ದಾರೆ.
ಶಾಸಕ ವೇದವ್ಯಾಸ್ ಕಾಮತ್ ಸೋಶಿಯಲ್ ಮೀಡಿಯಾ ಪೋಸ್ಟ್ ಗೆ ಕಾಮೆಂಟ್ ಮಾಡಿ ಹೀಗೆ ಮನವಿ ಸಲ್ಲಿಸಿದ್ದಾರೆ.