Menu

ನಾದಿನಿಗೆ ಮದುವೆ ಮಾಡಿದ್ದಕ್ಕೆ ಬಾವನಿಂದ ಕಿರುಕುಳ: ತಾಯಿ, ಮಕ್ಕಳ ಆತ್ಮಹತ್ಯೆ

ನಾದಿನಿಯ ಮದುವೆ ಮಾಡಿಸಿದ್ದಕ್ಕೆ ಕೋಪಗೊಂಡ ವ್ಯಕ್ತಿ ಅಮೆರಿಕದಿಂದಲೇ ಕಿರುಕುಳ ನೀಡುತ್ತ, ಬೆದರಿಕೆ ಹಾಕಲು ಶುರು ಮಾಡಿದ್ದರಿಂದ ಬೇಸತ್ತ ತಾಯಿ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿರುವ ಘಟನೆ ಹರಿಯಾಣದ ಕೈಥಾಲ್​ನಲ್ಲಿ ನಡೆದಿದೆ.

ಅಳಿಯನ ಕಾಟದಿಂದ ಬೇಸತ್ತ ಗುಡ್ಡಿ ದೇವಿ ಇಬ್ಬರು ವಿವಾಹಿತ ಹೆಣ್ಣುಮಕ್ಕಳೊಂದಿಗೆ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಗುಡ್ಡಿ ದೇವಿಯ ಶವ ಶೌಚಾಲಯದಲ್ಲಿ ಪತ್ತೆಯಾಗಿದ್ದರೆ, ಹೆಣ್ಣುಮಕ್ಕಳಾದ ನಿಶಾ ಹಾಗೂ ಪೂಜಾ ಶವ ಮಲಗುವ ಕೋಣೆಯಲ್ಲಿ ಪತ್ತೆಯಾಗಿದೆ.

ನಿಶಾಳ ಪತಿ ಜಿತೇಂದ್ರನೇ ಇವರ ಸಾವಿಗೆ ಕಾರಣ ಎಂದು ಪೂಜಾಳ ಪತಿ ಅನಿಲ್‌ ಆರೋಪಿಸಿದ್ದಾರೆ. ಪೂಜಾ 2025ರ ಫೆಬ್ರವರಿಯಲ್ಲಿ ಅನಿಲ್​ ಅವರನ್ನು ಮದುವೆಯಾಗಿದ್ದಳು. ಆದರೆ ಆಕೆಯ ಬಾವ ಜಿತೇಂದ್ರನಿಗೆ ಈ ಮದುವೆ ಇಷ್ಟವಿರಲಿಲ್ಲ. ಅಂದಿನಿಂದ ಪೂಜಾ, ಆಕೆಯ ಪತಿ ಹಾಗೂ ಕುಟುಂಬಕ್ಕೆ ನಿರಂತರ ಬೆದರಿಕೆ ಹಾಕುತ್ತಲೇ ಇದ್ದ ಎನ್ನಲಾಗಿದೆ.

ಜಿತೇಂದ್ರನಿಗೆ ಪತ್ನಿ ನಿಶಾ ಜತೆ ಹೊಂದಾಣಿಕೆ ಇಲ್ಲದ್ದರಿಂದ ನಿಶಾ ತವರು ಮನೆಯಲ್ಲಿ ವಾಸಿಸುತ್ತಿದ್ದಳು. ಜಿತೇಂದ್ರ ನಿತ್ಯ ಹಲವು ಬಾರಿ ಪೂಜಾಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ. ಆಕೆ ಎರಡು ದಿನಗಳ ಹಿಂದೆ ಪೋಷಕರ ಮನೆಗೆ ಬಂದಿದ್ದಳು. ಜಿತೇಂದ್ರನ ಕಾಲ್​ ಮತ್ತು ಮೆಸೇಜ್​ಗಳು ಬರುತ್ತಲೇ ಇದ್ದವು. ಆತ್ಮಹತ್ಯೆ ಮಾಡಿಕೊಳ್ಳುವ ಸ್ವಲ್ಪ ಮೊದಲು ಕೂಡ ಆತನ ಮೆಸೇಜ್ ಬಂದಿತ್ತು. ಪೂಜಾಳ ಪತಿ ಅನಿಲ್ ಅವರು ಜಿತೇಂದ್ರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆರೋಪಿ ಜಿತೇಂದ್ರ ಅಮೆರಿಕದಿಂದ ಬೇರೆ ಬೇರೆ ಸಂಖ್ಯೆಗಳಿಂದ ಕರೆ ಮಾಡಿ ಬೆದರಿಕೆ ಮತ್ತು ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಅನಿಲ್ ಹೇಳಿದ್ದಾರೆ. ಜಿತೇಂದ್ರ ಆಕೆಯನ್ನು ನಿಂದಿಸಿದ್ದಲ್ಲದೆ ಸಂಬಂಧಿಕರಿಗೂ ಅದೇ ರೀತಿ ಬೆದರಿಕೆ ಹಾಕಿದ್ದಾನೆ. ಒಂದು ಸಂಖ್ಯೆ ಬ್ಲಾಕ್ ಮಾಡಿದರೆ ಮತ್ತೊಂದು ಸಂಖ್ಯೆಯಿಂದ ಕಾಲ್ ಮಾಡಿ ಹಿಂಸೆ ಕೊಡುತ್ತಿದ್ದ ಎನ್ನಲಾಗಿದೆ.

Related Posts

Leave a Reply

Your email address will not be published. Required fields are marked *