ಕರ್ನಾಟಕದಲ್ಲಿ ಮುಂಗಾರು ಮಳೆ ಸುರಿಯುತ್ತಿದ್ದು, ಈಗಾಗಲೇ ಮಳೆಯಿಂದ ತತ್ತರಿಸಿರುವ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಧಾರಾಕಾರ ಮಳೆಯಾಗ ಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜನರು ಮುಂಜಾಗ್ರತೆ ವಹಿಸಿ ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸೂಚಿಸಲಾಗಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ .ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯ ಕಾರಣದಿಂದಾಗಿ ಶಾಲೆಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ. ಬೀದರ್, ಧಾರವಾಡ, ಹಾವೇರಿ, ಕಲಬುರಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಜೊತೆಗೆ ದಾವಣಗೆರೆ, ಚಾಮರಾಜನಗರ, ಮತ್ತು ಕೊಡಗು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಜಾರಿಗೊಳಿಸಲಾಗಿದೆ.
ಕಲಬುರಗಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿ ಕಮಲಾಪುರದ ಹಿಪ್ಪರಗಾ ಸೇತುವೆ ಮುಳುಗಡೆಯಾಗಿ ಕುದಮೂಡ – ಕಲಕುಟಗಾ ಗ್ರಾಮಗಳಿಗೆ ಸಂಪರ್ಕ ವ್ಯತ್ಯಯಗೊಂಡಿದೆ. ಮಹಾರಾಷ್ಟ್ರದಿಂದ ಭೀಮಾ ನದಿಗೆ ನೀರು ಬಿಡುಗಡೆ ಹಿನ್ನಲೆ ಭೀಮಾ ನದಿ ತೀರದ ಜನರಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಅಫಜಲಪುರ ಘತ್ತರಗಾ ಸೇತುವೆ ಮುಳುಗಡೆಯಾಗುತ್ತಿದೆ.
ಆಗುಂಬೆ, ಸೋಮವಾರಪೇಟೆ, ಸಿದ್ದಾಪುರ, ಶೃಂಗೇರಿ, ಭಾಗಮಂಡಲ, ಜಯಪುರ, ಕುಂದಾಪುರ, ಮಂಕಿ, ಕೋಟಾ, ಮೂಡಬಿದಿರೆ, ಬೆಳ್ತಂಗಡಿ, ಕೊಪ್ಪ, ನಾಪೋಕ್ಲು, ಉಪ್ಪಿನಂಗಡಿ, ಧರ್ಮಸ್ಥಳ, ಸುಳ್ಯ, ಪುತ್ತೂರು, ಕಾರ್ಕಳ, ಕುಮಟಾ, ಹುಮ್ನಾಬಾದ್, ಕಮ್ಮರಡಿ, ಕಳಸ, ಕೊಟ್ಟಿಗೆಹಾರ, ಮಾಣಿ, ಹಾರಂಗಿ, ಹುಂಚದಕಟ್ಟೆ, ಕೋಣನೂರು, ಎನ್ಆರ್ ಪುರ, ಮಂಗಳೂರು, ಗೇರುಸೊಪ್ಪ, ನಿಪ್ಪಾಣಿ, ಅಜ್ಜಂಪುರ, ತರೀಕೆರೆ, ಬಂಡೀಪುರ, ಭದ್ರಾವತಿ, ಬೇಲೂರು, ಬರಗೂರು, ಅಂಕೋಲಾ, ಲೋಕಾಪುರ, ಜೇವರ್ಗಿ, ಆಲಮಟ್ಟಿ, ಬಬಲೇಶ್ವರ, ಚಿಕ್ಕೋಡಿ, ಸೇಡಬಾಳ, ಮತ್ತು ಯಾದಗಿರಿಯಲ್ಲಿ ಈಗಾಗಲೇ ವ್ಯಾಪಕ ಮಳೆಯಾಗುತ್ತಿದೆ.
ಪಶ್ಚಿಮ ಬಂಗಾಳ, ಹಿಮಾಚಲಪ್ರದೇಶ, ಉತ್ತರಾಖಂಡ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್, ಒಡಿಶಾ, ಜಾರ್ಖಂಡ್, ಮಧ್ಯ ಮಹಾರಾಷ್ಟ್ರ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಅಸ್ಸಾಂ, ಮೇಘಾಲಯ, ಛತ್ತೀಸ್ಗಢ, ಉತ್ತರ ಪ್ರದೇಶ, ಬಿಹಾರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿ, ಮತ್ತು ಕಾರೈಕಲ್ನಲ್ಲಿ ಭಾರಿ ಮಳೆಯಾಗಲಿದೆ.