ಸಿಂಧನೂರು : ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಎಲ್ಲರಿಗೂ ಸರಳ ನಾಯಕ ಎಂದು ಹೆಸರು ಆಗಿರುವ ನಾರಾ ಚಂದ್ರಬಾಬು ನಾಯ್ಡು ಮೇಲೆ ಸುಳ್ಳು ಆರೋಪ ಮಾಡಿ ಕಂಬಿಯಿಂದ ತಳ್ಳಲು ಯತ್ನಿಸುತ್ತಿದ್ದಾರೆ ಇದನ್ನು ತಾಲೂಕು ತೆಲುಗು ಸಮಾಜ ಖಂಡಿಸುತ್ತದೆ ಎಂದು ಕಾಕತೀಯ ಕ್ಲಬ್ ಅಧ್ಯಕ್ಷ ತಲ್ಲೂರಿ ಸುಬ್ಬರಾವ್ ಆಗ್ರಹಿಸಿದರು
ಅವರು ತಾಲೂಕು ತೆಲುಗು ಸಮಾಜದ ವತಿಯಿಂದ ಚಂದ್ರು ಬಾಬು ನಾಯ್ಡು ಅವರ ಮೇಲೆ ಮಾಡಿರುವ ಆರೋಪವನ್ನು ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದರು ಆಂಧ್ರಪ್ರದೇಶದಲ್ಲಿ ಜನನಾಯಕರು ಹಾಗೂ ಸರಳ ವ್ಯಕ್ತಿ ಎಂದು ಚಂದ್ರಬಾಬು ನಾಯ್ಡು ಅವರು ಕರೆಸಿಕೊಳ್ಳುತ್ತಿದ್ದಾರೆ, ಇದು ಮುಂದೆ ರಾಜಕೀಯವಾಗಿ ಬೇರೆ ಅರ್ಥ ಪಡೆದುಕೊಳ್ಳುತ್ತದೆ, ಎಂಬ ಉದ್ದೇಶ ಇಟ್ಟುಕೊಂಡು ವಿನಾಕಾರಣ ಅವರ ಮೇಲೆ ಸುಳ್ಳು ಆರೋಪ ಮಾಡಿ ಜೈಲಿಗೆ ಕಳಿಸುವ ವ್ಯವಸ್ಥೆ ಆಂಧ್ರ ಪ್ರದೇಶದಲ್ಲಿ ನಡೆದಿದೆ ಇದನ್ನು ಪ್ರತಿಯೊಬ್ಬರು ಖಂಡಿಸಲೇಬೇಕು ಎಂದರು.
ನಾಯಕನಿಗೆ ರಕ್ಷಣೆ ನೀಡಲು ಒತ್ತಾಯ: ಸುಳ್ಳು ಆರೋಪದ ಅಡಿಯಲ್ಲಿ ಚಂದ್ರಬಾಬು ನಾಯ್ಡು ಅವರನ್ನು ರಿಮಾಂಡ್ ನಲ್ಲಿರುವ ಇಡಲಾಗಿದೆ ಅಲ್ಲಿ ಸೂಕ್ತ ರಕ್ಷಣೆ ನೀಡಬೇಕು ಹಾಗೂ ಅವರ ಮೇಲೆ ಬಂದಿರುವ ಆರೋಪಗಳು ಸುಳ್ಳು ಎಂದು ಸಾಬೀತಾಗಬೇಕು ಎಂದು ಆಗ್ರಹಿಸಿದರು.
ಸಮಾಜದ ಮುಖಂಡ ಬಿ.ಹರ್ಷ ಮಾತನಾಡಿ ಚಂದ್ರ ಬಾಬು ನಾಯ್ಡು ಅವರು ದೇಶದ ಆಸ್ತಿಯಾಗಿದ್ದಾರೆ ಅವರು ಮಾಡಿರುವ ಜನಪರ ಯೋಜನೆಗಳು ಇಂದಿಗೂ ಶಾಶ್ವತವಾಗಿ ಉಳಿದಿದ್ದಾವೆ, ಅಂತ ಅವರ ಮೇಲೆ ಸುಳ್ಳು ಆರೋಪ ಮಾಡುವವರು ಮನುಷ್ಯತ್ವ ಅಲ್ಲದವರು ಎಂದರು.
ಚಿಟ್ಟೂರಿ ಶ್ರೀನಿವಾಸ್ ಪಗಡದಿನ್ನಿ ಮಾತನಾಡಿ ತೆಲುಗು ಸಮಾಜದ ಮಹಾ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಆಗಿರುವ ಚಂದ್ರಬಾಬು ನಾಯ್ಡು ಅವರು ಎಲ್ಲರ ಮನಸ್ಸು ಗೆದ್ದಿದ್ದಾರೆ, ಮುಂದೆ ಮತ್ತೆ ಮುಖ್ಯಮಂತ್ರಿ ಆಗಿ ಬೆಳೆಯುತ್ತಾರೆ ಎಂಬ ಉದ್ದೇಶ ಇಟ್ಟುಕೊಂಡು ಅವರ ಮೇಲೆ ಇತರ ಸುಳ್ಳು ಆರೋಪ ಮಾಡಿದ್ದಾರೆ ಎಂದರು.
ವೈ.ನರೇಂದ್ರನಾಥ್ ಮಾತನಾಡಿ ಚಂದ್ರ ಬಾಬು ಅವರ ಸರಳತೆ ಮೆಚ್ಚಿ ದೇಶದ ಎಲ್ಲಾ ರಾಜ್ಯದಲ್ಲೂ ಹಾಗೂ ವರ ದೇಶದಲ್ಲಿ ಹೋರಾಟ ನಡೆಯುತ್ತಿದ್ದಾವೆ, ಮುಂದಿನ ದಿನಮಾನದಲ್ಲಿ ಇನ್ನೂ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಕೆ.ಕರಿಯಪ್ಪ, ಬಾಬುಗೌಡ ಬಾದರ್ಲಿ, ಕೆ.ಶೇಷಗಿರಿ ರಾವ್, ತೆಲುಗು ಸಮಾಜದ ಮುಖಂಡರಾದ ಅಂಕಯ್ಯ, ಮುರುಳಿಕೃಷ್ಣ, ಬಲಸು ಸುಬ್ರಮಣ್ಯಂ, ಟಿ.ವಿ ಪ್ರಭಾಕರ್ ರಾವ್, ಸಿಂಹಾದ್ರಿ ಕೃಷ್ಣಮೂರ್ತಿ, ಝಾನ್ಸಿ ರಾಣಿ, ಸಿ.ಎಚ್ ಪದ್ಮ, ಕವಿತಾ, ಸುರೇಶ ನೆಕ್ಕುಂಟಿ, ವೆಂಕಟೇಶ, ಗಣೇಶ ಸೇರಿದಂತೆ ಇತರರು ಇದ್ದರು.