ಸಿಂಧನೂರು : ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀ ಮಠ ಸೇವಾ ಟ್ರಸ್ಟ್ (ರಿ) ಹರೇಟನೂರು ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ಸೇವೆಯ ಸಂಪೂರ್ಣ ಮಾಹಿತಿಯನ್ನು ತಿಳಿದು, ಅಶ್ವಿನಿ ದಿ.ಪುನೀತ್ ರಾಜಕುಮಾರ್ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.
ಬೆಂಗಳೂರಿನ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯಲ್ಲಿ ಆಶ್ರಮದ ಸೇವೆ ಹಾಗೂ ಅಲ್ಲಿನ ಜೀವಿಗಳ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡು ನಮ್ಮ ನಾಡಿನ ಜನತೆ ಹಾಗೂ ನಮ್ಮ ಕುಟುಂಬ ಕಾರುಣ್ಯ ಆಶ್ರಮದ ಜೊತೆ ಸದಾಕಾಲವಿರುತ್ತದೆ ಎಂದು ಹೇಳಿದರು.
ದಿ.ಪುನೀತ್ ರಾಜಕುಮಾರ್ ಅವರ ಆದರ್ಶ ವ್ಯಕ್ತಿತ್ವ ಮೈಗೂಡಿಸಿಕೊಂಡು, ಕಾರುಣ್ಯ ಆಶ್ರಮದಿಂದ ನಾಡಿಗೆ ಸೇವೆ ದೊರೆಯಲಿ. ನೊಂದ ಜೀವಿಗಳ ಬಾಳಿಗೆ ಸುಂದರ ಅರಮನೆಯಾಗಲಿ. ಕಾರುಣ್ಯ ಆಶ್ರಮ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮನೆ ಮನೆ ಮಾತಾಗಿರುವ ನಮ್ಮ ಕರುಣಾಮಯಿ ಕರುನಾಡಿನ ತವರಾಗಿದೆ. ದಿ.ಪುನೀತ್ ರಾಜಕುಮಾರ್ ಅವರ ಕನಸುಗಳನ್ನು ನಾಡಿನ ಇಂತಹ ಸಂಸ್ಥೆಗಳು ನನಸು ಮಾಡಿ ಅನಾಥ ಎನ್ನುವ ಮಾನವ ಜೀವಿಗಳ ಪ್ರಜ್ಞೆಯನ್ನು ತೆಗೆದು ಹಾಕುವ ಕಾರ್ಯ ಭಗವಂತನಿಗೆ ಸಮಾನ ಎಂದರು.
ನಾನು ಒಂದು ಸಾರಿ ಕಾರುಣ್ಯ ಆಶ್ರಮಕ್ಕೆ ಭೇಟಿ ನೀಡುತ್ತೇನೆ. ಅಲ್ಲಿ ಆಶ್ರಯ ಪಡೆದಿರುವ ಎಲ್ಲಾ ಹಿರಿಯ ಜೀವಿಗಳು ನನಗೆ ದೇವರ ಸಮಾನರು. ಅಂತಹ ದೇವರುಗಳನ್ನು ಪ್ರೀತಿಸುವ ಮೂಲಕ ಲಾಲನೆ ಪೋಷಣೆ ಮಾಡುತ್ತಿರುವ ಈ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೂ ಹಾಗೂ ಸಿಬ್ಬಂದಿಗಳಿಗೂ ಈ ಆಶ್ರಮಕ್ಕೆ ಸಹಾಯ ಸಹಕಾರ ಮಾಡುವ ಎಲ್ಲಾ ದಾನಿಗಳನ್ನು ಭಗವಂತ ಕಾಪಾಡುತ್ತಾನೆ. ನನ್ನ ಕುಟುಂಬದ ಸಂಪೂರ್ಣ ಸಹಾಯ, ಸಹಕಾರ, ಕಾರುಣ್ಯ ಆಶ್ರಮಕ್ಕೆ ಇರುತ್ತದೆ ಎಂದು ಭರವಸೆ ನೀಡಿದರು. ಕಾರುಣ್ಯ ಆಶ್ರಮದ ವತಿಯಿಂದ ಅಂಧ, ಅನಾಥರ ಬಾಳಿಗೆ ಬೆಳಕಾದ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಲಿಂಗೈಕ್ಯ ಡಾ.ಪುಟ್ಟರಾಜ ಗವಾಯಿಗಳ ಭಾವಚಿತ್ರವನ್ನು ಭಕ್ತಿಯ ಭಾವೈಕ್ಯದಿಂದ ಸ್ವೀಕರಿಸಿಕೊಂಡರು.
ಈ ಸಮಯದಲ್ಲಿ ಆಶ್ರಮದ ಆಡಳಿತಾಧಿಕಾರಿಗಳಾದ ಡಾ. ಚನ್ನಬಸವಸ್ವಾಮಿ ಹಿರೇಮಠ ಅವರು ಒಂದು ಸಾರಿ ಕಾರುಣ್ಯಾಶ್ರಮಕ್ಕೆ ಆಗಮಿಸಬೇಕೆಂದು ಆಮಂತ್ರಿಸಿ ಕಾರುಣ್ಯ ಆಶ್ರಮದ ದಾನಿಗಳ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಮಯದಲ್ಲಿ ಕನ್ನಡ ಯೋಗಿ ರಾಜವಂಶತ್ತ ಅಭಿಮಾನಿಗಳ ಸಂಘ ಬೆಂಗಳೂರು. ಕಿರಣ್ ಬೆಟಗೇರಿ ಹುಬ್ಬಳ್ಳಿ ರಾಜ್ಯ ಕಾರ್ಯದರ್ಶಿಗಳು ರಾಜರತ್ನ ಕನ್ನಡ ಯುವ ಸಮಿತಿ. ಅಮರ್ ಸಹ ಕಾರ್ಯದರ್ಶಿಗಳು ರಾಜರತ್ನ ಕನ್ನಡ ಯುವ ಸಮಿತಿ. ಜೋಗಿ ಶಿವಣ್ಣ ರಾಯಚೂರು ಜಿಲ್ಲಾಧ್ಯಕ್ಷರು ಯುವ ಸಾಮ್ರಾಜ್ಯ.ಬಸನಗೌಡ ಮಾಲಿ ಪಾಟೀಲ್ ರಾಯಚೂರು ಜಿಲ್ಲಾ ಉಪಾಧ್ಯಕ್ಷರು ರಾಜರತ್ನ ಕನ್ನಡ ಯುವ ಸಮಿತಿ. ಕಾಳಪ್ಪ ತಾಲೂಕ ಅಧ್ಯಕ್ಷರು ಯುವ ಸಾಮ್ರಾಜ್ಯ ಸಿಂಧನೂರು. ಬಸವರಾಜ ಚಿರತನಾಳ ಕಾರ್ಯದರ್ಶಿಗಳು ಯುವ ಸಾಮ್ರಾಜ್ಯ ಸಿಂಧನೂರು. ಮತ್ತು ಅನೇಕ ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು.