ಈ ಜೈಲಿನಲ್ಲಿ ದುಡ್ಡೇ ದೊಡ್ಡಪ್ಪ, ಹಣ ಕೊಟ್ರೆ ರೂಂಗೆ ಟಿವಿನೂ ಬರುತ್ತೆ..! ಕೈಗೆ ಮೊಬೈಲ್ ಕೂಡ ಸಿಗುತ್ತೆ...!
ಬೆಳಗಾವಿ : ಶತಮಾನದ ಪುರಾತನ, ಇತಿಹಾಸಹೊಂದಿರುವ ಬೆಳಗಾವಿ ಹಿಂಡಲಗಾ ಜೈಲು ಅಕ್ರಮಗಳ ಕೂಟ ಆಗಿದೆ. ಜೈಲಧಿಕಾರಿಗಳ ವರ್ತನೆ ನಾವಿರೋದೆ ಹೀಗೆ ಎಂಬಂತಿದೆ. ದುಡ್ಡಿದ್ರೆ ದುನಿಯಾ, ದುಡ್ಡಿಲ್ಲದಿದ್ರೆ ಡೋಂಟ್ ಕೇರ್. ಈ ಐತಿಹಾಸಿಕ ಜೈಲಿನ ಪರಿಸ್ಥಿತಿ ಸುಧಾರಿಸುವುದು ಯಾವಾಗ? ಜೈಲಿನ ಕರ್ಮಕಾಂಡದ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಹಣ ಕೊಟ್ರೆ ಟಿವಿನೂ ಬರುತ್ತೆ, ಕೈಗೆ ಮೊಬೈಲ್ ಸಿಗುತ್ತೆ. ಮೊಬೈಲ್ ಬಳಕೆ ನಿಷೇಧವಿದ್ರೂ ಜೈಲಿನಲ್ಲಿ ಬಿಂದಾಸ್ ಆಗಿ ಬಳಕೆ ಮಾಡ್ತಿದ್ದಾರೆ. ಜೈಲಿನಲ್ಲಿ ಕೈದಿಗಳು ಮೊಬೈಲ್, ಟಿವಿ ಬಳಸುವ ದೃಶ್ಯ ಲಭ್ಯವಾಗಿದ್ದು, ಸಿಬ್ಬಂದಿಗೆ ಹಣ ಕೊಟ್ಟರೆ ಕೈದಿಗಳಿಗೆ ವಿಲಾಸಿ ಜೀವನ ಸಿಗುತ್ತಿದೆ. ಕೆಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಕರೆ ಹೋಗಿದ್ದೂ ಈ ಜೈಲಿನಿಂದಲೇ ಎಂಬುವುದು ನೆನಪಿರಲಿ. ಕರ್ಮಕಾಂಡ ನಡೆಸೋ ಅಧಿಕಾರಿಗಳ ವಿರುದ್ಧ ಕ್ರಮ ಯಾವಾಗ..? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅಯೋಡಿನ್ ರಹಿತ ಉಪ್ಪು ಸೇವಿಸಬೇಕಾದ ಅನಿವಾರ್ಯತೆ ಹಿಂಡಲಗಾ ಕೈದಿಗಳಿಗೆ ಎದುರಾಗಿದೆ. ಹಣ ಕೊಟ್ಟರೆ ಇಲ್ಲಿ ವಿಲಾಸಿ ಜೀವನ, ಇಲ್ಲವಾದರೆ ನರಕಯಾತನೆ ಫಿಕ್ಸ್ ಅನ್ನೋದು ಮತ್ತೊಂದು ಭಾರಿ ಸಾಭಿತಾಗಿದೆ. ಹೆಣಕ್ಕೆ ಹಾಕುವ ಉಪ್ಪುನ್ನೇ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಆಹಾರಕ್ಕೆ ಉಪಯೋಗಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿದೆ. ಸದಾ ಒಂದಿಲ್ಲೊಂದು ಅಕ್ರಮ ಚಟುವಟಿಕೆಗಳ ಮೂಲಕ ಹೆಸರು ಕೆಡಿಸಿಕೊಳ್ಳುತ್ತಿರುವ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಅಡುಗೆಗೆ ಮೃತದೇಹಕ್ಕೆ ಉಪಯೋಗಿಸುವ ಉಪ್ಪನ್ನು ಬಳಸುತ್ತಿದೆಯಂತೆ!?